Thursday, 19 January 2023

ನನ್ನ ಶಾಲೆ

06- ನನ್ನ ಶಾಲೆ 

-ಜ.ನಾ. ತೇಜಶ್ರೀ 

 'ನನ್ನ ಶಾಲೆ' ಪದ್ಯವೂ ನಾವು ಓದಿದ ಶಾಲೆಯ ಚಿತ್ರಣ  ನೀಡುವುದರ ಜೊತೆಗೆ ಆಧುನಿಕರಣಕ್ಕೆ ಒಳಗಾದಾಗ ಅದರಲ್ಲಿ ಆಗುವ ಮಾರ್ಪಾಡನ್ನು ಚಿತ್ರಿಸುತ್ತದೆ. ಮಾನವ ವೈಜ್ಞಾನಿಕಯುಗಕ್ಕೆ ಕಾಲಿಟ್ಟಂತೆ ಅನೇಕ ಬದಲಾವಣೆ ಒಳಗಾಗುತ್ತಾನೆ. ಶಾಲೆಯಲ್ಲಿದ್ದ ಹಿಂದಿನ ಆಟ-ಪಾಠದಲ್ಲಿ ಹೊಸ ತರದ ರೂಪರೇಷೆಗಳು ಬಂದು ಜನರನ್ನ ಹೆಚ್ಚು ಸೆಳೆಯುವಂತೆ ಮಾಡುತ್ತದೆ. ಭಾವ ಸಂವೇದನೆಗಳಿಗೆ ಅಲ್ಲಿ ಅವಕಾಶವೇ ಇರುವುದಿಲ್ಲ. ಕೇವಲ ಸವಿ ನೆನಪುಗಳನ್ನು ಮಾತ್ರ ಮಿಲುಕು ಹಾಕಬೇಕು.

ಜ.ನಾ. ತೇಜಶ್ರೀಯವರು ಹುಟ್ಟಿ ಬೆಳೆದ ಪರಿಸರವನ್ನು ಬಣ್ಣಿಸುತ್ತಲೆ ಮೊದಲಿನ ಸ್ಥಿತಿ ಕಳೆದುಕೊಂಡ ಶಾಲೆಯ ಬಗೆಗಿನ ನೆರವಿನ ಛಾಯೆ ಇದೆ ಹಿಂದೆ ತಾನು ಆಡಿ ಬೆಳೆದ ಸ್ಥಳ ಇವತ್ತು ಮಾಯವಾಗಿ ಆ ಸ್ಥಳದಲ್ಲಿ ಹೊಸತು ಕಟ್ಟಡ ನಿರ್ಮಾಣವಾಗಿದೆ. ಅದರಲ್ಲೂ ಎಲ್ಲರ ಪಾಲಿನ ಬಹಳ ಪ್ರಮುಖ ಕೇಂದ್ರ ಸ್ಥಾನ ಶಾಲೆ. ಶಾಲೆಯಲ್ಲಿ ಕಲಿತ ವಿದ್ಯೆಯಿಂದ ಹಿಡಿದು ಅಲ್ಲಿ ಆಡಿದ ಆಟ-ಪಾಠ ಕಣ್ಣಿಗೆ ಕಟ್ಟುವಂತೆ ಮನಸ್ಸಿನಲ್ಲಿ ತಳವೂರಿರುತ್ತದೆ. ಅದನ್ನು ಬಣ್ಣಿಸುತ್ತಲೇ ಸುಖ-ಸಂತೋಷವನ್ನು ಅನುಭವಿಸುತ್ತಾ ಇವತ್ತಿನ ಸ್ಥಿತಿಗತಿಯ ಬಗ್ಗೆ ಮರುಕದ ಎಳೆ ಇರುವುದನ್ನು ಕವಿತೆಯಲ್ಲಿ ಕಾಣಬಹುದು. ಶಾಲೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸುವ ತಾಣ. ಎಷ್ಟೋ ಜನ ವೈದ್ಯರನ್ನು, ಅಭಿಯಂತರನ್ನು, ವಿಜ್ಞಾನಿಗಳನ್ನು, ಮೇಧಾವಿಗಳನ್ನು, ಸಂತರನ್ನು-ಹೀಗೆ ಅನೇಕ ವ್ಯಕ್ತಿಗಳನ್ನು ರೂಪಿಸುವ ಜಾಗ, ಹಾಗಾಗಿ ಆ ಸ್ಥಳವನ್ನು ಯಾರು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಜೀವನದಲ್ಲಿ ಮತೇ ಮತೇ ಮೆಲುಕು ಹಾಕುತ್ತಾ ಶಾಲೆಯ ನೆನಪನ್ನು ಸವಿಯುತ್ತಾರೆ.

ಒಂದು ಕಾಲಘಟ್ಟದಲ್ಲಿ ಪ್ರೀತಿ-ವಿಶ್ವಾಸ, ಮಾನವೀಯ ಅಂತ ಕರಣ ಮೊದಲಾದ ಅಂಶಗಳು ರೂಪುಗೊಳ್ಳುವಂತೆ ಮಾಡಿದ ಶಾಲೆ, ಇವತ್ತು ತನ್ನ ಗತವೈಭವವನ್ನು ಕಳೆದುಕೊಂಡು ಆಧುನಿಕರಣದತ್ತ ಮುಖ ಮಾಡಿರುವುದೇ ಇಲ್ಲಿಯ ದುರಂತ. ಉದಾಹರಣೆಗೆ ಜಾರಗುಪ್ಪೆಯನ್ನು ಗಮನಿಸುವುದಾದರೆ ಇಂದು ಆ ಶಾಲೆಯಲ್ಲಿ ಅದರ ನಾಮಾವಶೇಷವು ಇಲ್ಲ. ಆ ಜಾರುಗುಪ್ಪೆಯಲ್ಲಿ ಆಡಿದ ಆಟ ಮಾತ್ರ ಹಚ್ಚ ಹಸಿರಾಗಿಯೇ ಕಣ್ಣಲ್ಲಿ ಕಟ್ಟಿದಂತೆ ಇದೆ.

ಕವಿಯಿತ್ರಿಯವರು ಎಷ್ಟೋ ಅಕ್ಕಂದಿರು ಆ ಜಾರುಗುಪ್ಪೆಯಲ್ಲಿ ಆಡಿದ್ದರು. ಕುಡಿದು ಕುಪ್ಪಳಿಸಿದರು, 'ನಾನಾದ ಮೇಲೆ ಎಷ್ಟೋ ಜನವೋ' ಎಂದು ಯೋಚಿಸುತ್ತಲೇ ಆ ಜಾರಗುಪ್ಪೆ ಈಗಿಲ್ಲ. ಅದರ ಮೇಲೆ ಜಾರಿ ಹರಿದ ಸಮವಸ್ತ್ರ ಮಾತ್ರ ನನ್ನಲ್ಲಿದೆ ಜೊತೆಗೆ ಆ ಸುಂದರ ನೆನಪುಗಳಾದ ಇನ್ನೂ ಹಸಿರಾಗಿವೆ ಎಂಬ ನೆನಪುಗಳ ಬೆನ್ನು ಹತ್ತಿದ್ದಾರೆ.

ಕೆತ್ತಿ ಕೆತ್ತಿ ಗೋರಿದ ಮರದಿಂದ ಗೋರಿದು ತೆಗೆಯುವ ಕಾಯಕ ಮಾತ್ರ ಹಾಗೆಯೇ ಮುಂದುವರಿದಿದೆ. ಹಿಂದಿನ ಶಾಲಾ ಕಟ್ಟಡ ನೆಲಸಮವಾಗಿ ಹೊಸ ಕಟ್ಟಡ ನಿರ್ಮಾಣವಾಗಿದೆ. ಇದು ಆಧುನಿಕರಣದ ಸಂಕೇತ ಹೊಸತು ಬಂದಾಗ ಅದನ್ನು ಸ್ವೀಕರಿಸುತ್ತಾ ಸಾಗುವುದೇ ಜೀವನ. ಅಳತೆ ನೆನಪಿನಲ್ಲಿ ಅದು ಕೊಡುವ ನೆನಪಿನ ಆಹ್ಲಾದ ಅಳಿಸಲಾರದ ಸಂತೋಷವನ್ನು ನೀಡುತ್ತದೆ.

ನನ್ನ ಶಾಲೆ ಹೀಗಿತ್ತು ಎಂಬುದನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಡಬೇಕು. ಆಗ ಅದರ ಕಲ್ಪನೆಯ ಚಿತ್ರ ಮೂಡಿಸುಲು ಸಾಧ್ಯ. ಅದು ಕೊಡುತ್ತಿದ್ದ ಆನಂದವನ್ನು ಪದಗಳಲ್ಲಿ ಮಾತ್ರ ವರ್ಣಿಸುವುದು ಹಳತು ಹೊಸತಾಗುವ, ಹೊಸತ್ತು ಹಳೆತಾಗಿ, ಮತ್ತೆ ಹೊಸತಾಗುತ್ತಲೆ ಜಗತ್ತಿಗೆ ಬೇಕಾದಂತೆ ಬದಲಾಗುವ ಆಶಯವನ್ನು ಇಲ್ಲಿ ಕಾಣಬಹುದು.

 ಇಂದು ನಾವು ಜಾಗತೀಕರಣವೆಂಬ ಕೆಡಂಭೂತದ ತೆಕ್ಕೆಯೊಳಗೆ ಸಿಕ್ಕಿಹಾಕಿಕೊಂಡು ಯಂತ್ರ ಮಾನವನಾಗಿ ಜೀವಿಸುವ ಕಾಲಘಟ್ಟದಲ್ಲಿದ್ದೇವೆ. ಇದರಿಂದ ಕಳಸಿಕೊಂಡು ಬರಲಾರದ ಸ್ಥಿತಿಯಲ್ಲಿರುವುದನ್ನು ಈ ಕವಿತೆ ಬಿಂಬಿಸುತ್ತದೆ.

ಹಳೆ ಶಾಲೆಗಳನ್ನು ಕೆಡವಿದರೂ ಆ ಭಗ್ನ ಅವಶೇಷಗಳಂತೆ ನೆನಪುಗಳು ಭಾಗ್ನವಾಗುವುದಿಲ್ಲ ಸಮಾಧಿಯಾಗುವುದಿಲ್ಲ ಬದಲಾಗಿ ಶಾಲೆಯಲ್ಲಿ ಕಲಿತ ಜ್ಞಾನದಿಂದ, ಕಷ್ಟ-ಸುಖ, ನೋವು-ನಲಿವು ಕೊಟ್ಟ ಅನುಭವದಿಂದ ಜೀವನಕ್ಕೆ ಒಂದು ಭದ್ರಬುನಾದಿ ಸಿದ್ಧವಾಗುತ್ತದೆ, ಹಳೆಯ ನೆನಪುಗಳ ಜೀವಕೊಡುತ್ತದೆ.

ಜಾಗತೀಕರಣವು, ಸಮಕಾಲೀನ ಜಗತಿಕ ವಿದ್ಯಮಾನವಾಗಿದ್ದು ಅದು ಇಂದು ಆಯ್ಕೆಯಾಗಿ ಉಳಿದಿಲ್ಲ ಅದು ಬೇಕಾಗಲಿ, ಬೇಡವಾಗಲಿ ಎಲ್ಲಾ ರಾಷ್ಟ್ರಗಳು ಅನಿವಾರ್ಯವಾಗಿ ಒಳಗಾಗುತ್ತಿರುವ ಒಂದು ಪ್ರಕ್ರಿಯೆಯಾಗಿದೆ.

ಗಿರಣಿ ವಿಸ್ತಾರ ನೋಡಮ್ಮ

 05- ಗಿರಣಿ ವಿಸ್ತಾರ ನೋಡಮ್ಮ

-ಶಿಶುನಾಳ ಶರೀಫ ಸಾಹೇಬ


ಕರ್ನಾಟಕದ ಕಬೀರ ಎಂದು ಕರೆಸಿಕೊಂಡ ಕನ್ನಡದ ಮಹಮ್ಮದೀಯ ಸಂತ ಕವಿ ಶಿಶುನಾಳ ಶರೀಫ ಸಾಹೇಬರು ಧಾರವಾಡ ಜಿಲ್ಲೆಯ ಶಿಶುನಾಳ ಎಂಬ ಊರಿನವರು. ಉತ್ತರ ಕರ್ನಾಟಕದ ಜನಪ್ರಿಯ ಮತ್ತು ಅನುಭಾವಿ ಕವಿಯಾದ ಶರೀಫರು ಜಾತಿ-ಮತಗಳ ಗಡಿಯನ್ನು ದಾಟಿ ಹರಿ-ಹರ ಹಾಜರತ್ ತತ್ವಗಳ ಸಂಗಮವಾಗಿ ಕಾಣಿಸುತ್ತಾರೆ.

ಈ ಪದ್ಯ ಭಾಗವೂ ಜಾಗತೀಕರಣದ ಸಂದರ್ಭದಲ್ಲಿ ಹತ್ತಿ ಗಿರಣಿಯು ಹೊಸ ಆವಿಷ್ಕಾರವನ್ನು ತೆರೆದಿಡುತ್ತದೆ. ಜನರಿಗೆ ಹೇಗೆ ಕುತೂಹಲವನ್ನು ಮಾಡಿಸಿತು ಎಂಬುದರ ಬಗ್ಗೆ ತಿಳಿಸುತ್ತದೆ. ಶರೀಫರು ಹತ್ತಿ ಗಿರಣಿಯ ಚಟುವಟಿಕೆಗಳ ಬಗ್ಗೆ ಹೇಳುತ್ತಾಲೆ ತಾತ್ವಿಕತೆಯೆಡೆಗೆ ಕೊಂಡೊಯ್ಯುತ್ತಾರೆ. ಮಾನವ ಸೃಷ್ಟಿಸಿದ ಯಂತ್ರಕ್ಕಿಂತ ದೈವ ಸೃಷ್ಟಿಸಿದ ದೇಹವೆಂಬ ಯಂತ್ರವೇ ಅವರಿಗೆ ಬೆರಗಾಗಿ ಕಾಣಿಸುತ್ತದೆ. ಇಲ್ಲಿ ಕವಿ ಗಿರಣಿ ವಿಸ್ತಾರವನ್ನು ಆಧ್ಯಾತ್ಮಿಕದ ನೆಲೆಗಟ್ಟಿನಲ್ಲಿ ಪರಿಭಾವಿಸುತ್ತಾರೆ. ಅದಕ್ಕೆ ರೂಪ ಪ್ರತಿಮೆಗಳಾಗಿ ಹೊರಹೊಮ್ಮುವ ಯಂತ್ರ ಮತ್ತು ದೇಹವನ್ನು ಸಮೀಕರಿಸಿ ಸಾಮ್ಯತೆಯನ್ನು ಸಾಂದರ್ಭಿಕ ವಿಷಯ ಸನ್ನಿವೇಶವನ್ನು ಹೇಳ ಹೊರಟಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮವಾಗಿ ಆರಂಭವಾದ ಗಿರಣಿಗಳ ಕಂಡ ಜನರಿಗೆ ಬಹಳ ಆಶ್ಚರ್ಯವಾಯಿತು. ಜನರು ಕೈ ಮಗ್ಗದಲ್ಲಿ ನೀಡುತ್ತಿದ್ದ ಬಟ್ಟೆಗಳು, ಈಗ ಯಂತ್ರಗಳಿಂದ ಸಿದ್ಧವಾಗುತ್ತಿದ್ದವು. ಮಹಾರಾಜ,ರಾಣಿ ಕರ್ನಾಟಕದಲ್ಲಿ ಹತ್ತಿ ಗಿರಣಿಯನ್ನು ಪ್ರಾರಂಭಿಸಿದ್ದಾರೆ. ಇದು ನಿಜಕ್ಕೂ ಎಲ್ಲರಿಗೂ ಆಶ್ಚರ್ಯವೇ ಸರಿ ಎಂದು ಹೇಳುತ್ತಾ... ಮನುಷ್ಯನ ದೇಹವನ್ನು ಗಿರಣಿಗೆ ಹೋಲಿಸುತ್ತಾ ಧರಣಿ ಪತಿ ಈಶ್ವರ ಮತ್ತು ಅದರೊಳಗೆ ಜರುಗುವ ಕೆಲಸವುಗಳು ಬಹಳ ಆಶ್ಚರ್ಯ ಹುಟ್ಟಿಸುತ್ತವೆ ಎಂದಿದ್ದಾರೆ.

ಗಿರಣಿಯಲ್ಲಿ ಜಲ, ಅಗ್ನಿ, ವಾಯುವಿನ ಬಳಕೆಯಿಂದ ಕೆಲಸ ನೆರವೇರುತ್ತದೆ. ಯಂತ್ರಗಳು ಚಲಿಸುತ್ತಿರುವಂತೆಯೇ ಕೊಡವೆಯ ಆಕಾರದೆತ್ತರಕ್ಕೆ ಹೊಗೆ ಹರಡುವುದನ್ನು 'ಚಲುವ ಮಧ್ಯದ ಕಂಬವೋ' ಎಂದು ಅಚ್ಚರಿ ಪಟ್ಟಿದ್ದಾರೆ. ದೇಹವೆಂಬ ಗಿರಣಿಯು ಜಲ, ಅಗ್ನಿ, ವಾಯು, ಆಕಾಶ, ಭೂಮಿ ಎಂಬ ಪಂಚಭೂತಗಳಿಂದ ಮಾಡಿದ್ದು, ದೇಹದೊಳಗಿನ ಅಂಗಾಂಗಗಳು ಯಂತ್ರದಂತೆ ಕೆಲಸ ನಿರ್ವಹಿಸುತ್ತವೆ. ಮಾನವನ ದೇಹದ ರಚನೆಯ ಅಚ್ಚರಿಯನ್ನು ಇಲ್ಲಿ ಸ್ಮರಿಸಿದ್ದಾರೆ.

ಗಿರಣಿಯ ಯಂತ್ರದಲ್ಲಿ ಒಂಬತ್ತು ಹಲ್ಲುಗಳಿವೆ ನೂಲಿಗೆ ಆಧಾರವಾಗಿ ಹುಳಿ ಇದ್ದ ಕೊಳವೆಗಳು ನೋವ ಎಳೆಗಳನ್ನು ತುಂಬುತ್ತ ಇರುತ್ತದೆ. ಗಿರಣಿಯಲ್ಲಿ ದಾರ ಸಿದ್ದ ವಾಗುವ ಕ್ರಿಯೆ ಚಮತ್ಕಾರದಂತೆ ನಡೆಯುವುದನ್ನು ಶರೀಫರು ಇಲ್ಲಿ ಹೇಳಿದ್ದಾರೆ.

ಮಾನವನ ದೇಹದಲ್ಲಿ ಒಂಬತ್ತು ರಂಧ್ರಗಳಿವೆ. ಪ್ರತಿಯೊಂದು ಅಂಗಾಂಗವು ತನ್ನ ಕಾರ್ಯದಲ್ಲಿ ಪ್ರತಿಕ್ಷಣವೂ ಮಗ್ನವಾಗಿರುತ್ತದೆ. ಎಲ್ಲಾ ಕ್ರಿಯೆಯನ್ನು ನಿಯಂತ್ರಿಸುತ್ತದೆ. ಷಡ್ಚಕ್ರಗಳು ಮಾನವನ ಆಧ್ಯಾತ್ಮದ ಸೂತ್ರವನ್ನು ಹಿಡಿದಿರುತ್ತದೆ.

ಬೀಜದ ಜೊತೆಗಿರುವ ಹತ್ತಿಯನ್ನು ಬೀಜದಿಂದ ಬೇರ್ಪಡಿಸಿ ಶುದ್ಧ ಹತ್ತಿಯ ಸುರುಳಿಯನ್ನು ಸಿದ್ಧಪಡಿಸಿ ಚಕ್ರದ ಮೇಲೆ ಸಂಚರಿಸುವಂತೆ ಮಾಡಿದರೆ ದಾರದ ಉಂಡೆ (ಕುಕ್ಕಡಿ) ಸಿದ್ಧವಾಗುತ್ತದೆ.

ಮಾನವನ ಸ್ವಭಾವವು ಶುದ್ಧ ಹತ್ತಿಯಂತೆ ನಿರ್ಗುಣ ಸ್ವಭಾವದಾಗಿತ್ತು ಎಂಬ ಗಲಿಗಳಿಗೆ ( ನಾಡಿಗಳಿಗೆ ) ಸಂಚರಿಸಿ ಶುದ್ಧವಾದ ಶ್ವಾಸವು ಹಿಂಜಿದ ಅರಳೆಯಂತೆ ನಾಡಿಯಲ್ಲಿ ಸಂಚರಿಸಿದಾಗ ಮಾನವನಿಗೆ ಆಧ್ಯಾತ್ಮ ಜ್ಞಾನವು ಸಿದ್ದಿಸುತ್ತದೆ. ಆಗ ಮನುಷ್ಯ ಪರಿಪೂರ್ಣತೆಯನ್ನು ಪಡೆದವನಾಗುತ್ತಾನೆ.

ಈ ರೀತಿ ಸಿದ್ಧವಾದ ನೂಲು ಸಾಮಾನ್ಯವಾದದ್ದಲ್ಲ ಅದು ಪರಬ್ರಹ್ಮ ಪಟ್ಟ (ರೇಷ್ಮೆ ಸೀರೆ) ಇಂತಹ ದಿವ್ಯವಾದ ರೇಶಿಮೆಯ ನೂಲನ್ನು ಸಿದ್ಧಗೊಳಿಸಿ, ದೇವಾಂಗ ಋಷಿಯಿಂದ ನೇಯಿಸಿ ಹಚ್ಚಡವನ್ನು (ಹೊದಿಕೆ) ಬ್ರಹ್ಮನು ಸಿದ್ಧಗೊಳಿಸುತ್ತಾನೆ. ಈ ಹಚ್ಚಡವನ್ನು ಹಚ್ಚಿಕೊಂಡು ಲೋಕದ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು.

ಈ ರೀತಿ ಗಿರಣಿಯ ಭೌತಿಕ ವರ್ಣನೆಯಿಂದ ಪ್ರಾರಂಭವಾದ ಈ ರಚನೆ, ಗಿರಣಿಯನ್ನು ಮಾನವನಿಗೆ ಹೋಲಿಸಿ ಅವನ ಒಳಿತನ್ನು ಅವರಿಗೆ ನೆನಪಿಸುವುದರೊಂದಿಗೆ ಮುಕ್ತಾಯವಾಗುತ್ತದೆ.

ಜನರಿಗೆ ಹೊಸದಾಗಿ ನಿರ್ಮಿತವಾದ ಹತ್ತಿ ಗಿರಣಿಯು ಬೆರಗನ್ನುಂಟುಮಾಡಿದರೆ ಕವಿಗೆ ಅದಕ್ಕಿಂತ ಮಿಗಿಲಾಗಿ ಶರೀಫರೆಂಬ ಯಂತ್ರವೇ ಅದ್ಭುತವಾಗಿ ಕಾಣುತ್ತದೆ. ಅಂದರೆ ಮಾನವ ಸೃಷ್ಟಿಗಿಂತ ದೈವ ಸೃಷ್ಟಿ ಮಿಗಿಲಾಗಿದೆ ಎಂಬುದು ಕವಿಯ ಅಭಿಪ್ರಾಯ. ಅದನ್ನು ಜೀವ-ನಿರ್ಜೀವಗಳ ಹಿನ್ನೆಲೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಾನವ ನಿರ್ಮಿತ ಯಂತ್ರದ ಜೊತೆಗೆ ದೈವ ಸೃಷ್ಟಿಸಿದ ದೇಹವೆಂಬ ಯಂತ್ರವನ್ನು ಸಮೀಕರಿಸಿಕೊಂಡು ಹೇಳಿರುವ ಕವಿ ಶರೀಫರು ಯಂತ್ರ ನಾಗರಿಕತೆಯ ರೂಕ್ಷತೆಯನ್ನು ನೀಡಿದ್ದಾರೆ.

ಕನ್ನಡ (ವಾಣಿಜ್ಯ ಗಂಗೋತ್ರಿ)

Welcome To Kannada Notes Section    

ಘಟಕ-01 : ಕನ್ನಡ ನಾಡು-ನುಡಿ ಚಿಂತನೆ :

ಅ) ಕನ್ನಡಾಂಬೆಯ ಹಿರಿಮೆ(click here)

ಆ) ಕನ್ನಡ ರಾಜ್ಯೋತ್ಸವ (click here)

ಘಟಕ-02 : ಸಂಸ್ಕೃತಿ

ಅ) ಅಮ್ಮ, ಆಚಾರ, ನಾನು(click here)

ಆ) ಹಂಪೆಯಲ್ಲಿ(click here)

ಘಟಕ-03 : ಜಾಗತೀಕರಣ 

ಅ) ಗಿರಣಿ ವಿಸ್ತಾರ ನೋಡಮ್ಮ(click here)

ಆ) ನನ್ನ ಶಾಲೆ(click here)

ಘಟಕ-04 : ಸಂಕೀರ್ಣ 

ಅ) ದಿಕ್ಕಿಲ್ಲದ ಹಾಡು(click here)

ಆ) ಪೂರ್ಣತೆಯ ಪರಮಕಲೆ(click here)

ಹಂಪೆಯಲ್ಲಿ

 04-ಹಂಪೆಯಲ್ಲಿ

-ಜಿ.ಎಸ್. ಶಿವರುದ್ರಪ್ಪ 


ಜಿಎಸ್ಎಸ್ ಎಂದು ಖ್ಯಾತರಾದ  ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಈಸೂರಿನಲ್ಲಿ 1926ರಲ್ಲಿ ಜನಿಸಿದರು. ಕನ್ನಡ ಸರಸ್ವದ ಲೋಕದಲ್ಲಿ ತಮ್ಮ ಹತ್ತಾರು ಕೃತಿಗಳ ಮೂಲಕ ಓದುಗರ ಮನ ಸೆಳೆದಿದ್ದಾರೆ.

ಭಾರತೀಯ ಸಾಹಿತ್ಯ, ಅದರಲ್ಲೂ ಪ್ರಮುಖವಾಗಿ ಕನ್ನಡ ಸಾಹಿತ್ಯದಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವದ ಕುರಿತ ಹನಿಗಮನಗಳಿಂದ ಹಿಡಿದು ಬೃಹತ್ ಪುಟಗಳವರೆಗಿನ ಸಂಪುಟಗಳೇ ರಚನೆಯಾಗಿವೆ. ಈ ಹಿನ್ನೆಲೆಯಲ್ಲಿ ಜಿಎಸ್ಎಸ್ ಅವರ 'ಹಂಪೆಯಲ್ಲಿ' ಎಂಬುದು ಕಲೆಯ ಮಹತ್ವವನ್ನು ತಿಳಿಸುವ ಪ್ರಸಿದ್ಧ ಕವಿತೆಯಾಗಿದೆ. ಈ ಕವಿತೆಯ ಮುಖ್ಯ ವಸ್ತುವೆಂದರೆ ಪ್ರಾಚೀನ ಕಲೆ, ಸಂಸ್ಕೃತಿ ಮತ್ತು ಸಂಗೀತ ವೈಭವಗಳು ಮನುಷ್ಯನ ದುರಾಸಿಯ ಪರಿಣಾಮವಾಗಿ ಹೇಗೆ ವಿಕಾರಗೊಂಡವು ಎಂಬುದನ್ನು ವಿವರಿಸುವುದಾಗಿದೆ. ಅಲ್ಲದೆ ಇಲ್ಲಿ ಕಲೆಯ ಬಗ್ಗೆ ಕವಿ ಗಿರುವ ಅಪಾರ ಗೌರವ ವ್ಯಕ್ತವಾಗಿದೆ.

ಹಾಳು ಹಂಪಿಯ ಗತವೈಭವವನ್ನು ಸಂತುಲ ವೀಕ್ಷಿಸುತ್ತ ಕವಿ ವಿಸ್ತಾರವಾದ ಹಾಳು ಬಿದ್ದ ಪುರಾತನ ಕಟ್ಟಡಗಳು ಶತ್ರುಗಳಿಂದ ಆದ ದಾಳಿಯ ಭೀಕರತೆಯನ್ನು 'ಗೋಳು' ಎಂಬ ವ್ಯಾಖ್ಯಾನಿಸಿದ್ದಾರೆ. ಈ ದಾಳಿಯಿಂದ ನಾರಳಿದವರೆಷ್ಟೋ!! ಪಾಳು ಬಿದ್ದ ಗೋಡೆಗಳಲ್ಲಿ ಈ ಗೋಳಿನ ನೆರಳು ಕವಿಗೆ ಕಂಡಿದೆ. ಗೋಡೆಗಳಲ್ಲಿ ಕಂಡ ಬಿರುಕಿನಲ್ಲಿ (ತುದಿಯ ಬಿರುಕಿನಿಂದಂತೆ ಕಾಣುತ್ತಿದೆ) ಬೆಳಕು ತೂರಿ ಬರುತ್ತಿದೆ. ಈ ಬೆಳಕು ಸಾವಿರಾರು ಜನರ ಭಿನ್ನ ಬಯಕೆಗಳ ಪ್ರತೀಕವಾಗಿದೆ. 

ಈ ಜಾಗವನ್ನು ನೋಡಿದರೆ ಇಲ್ಲೊಂದು ಬಲಶಾಲಿ ಸಾಮ್ರಾಜ್ಯವಿತ್ತೇ? ಎಂಬ ಅನುಮಾನ ವ್ಯಕ್ತವಾಗುತ್ತಿದೆ ಕವಿಗೆ. ಚಿನ್ನದ ಭೂಮಿಯಂತಿದ್ದ ಈ ಭೂಮಿಯಲ್ಲಿ ಕಲ್ಲು ಮಣ್ಣು ತೂರಿ ಬರುತ್ತಿದೆ. ಈ ಭೂಮಿಯಲ್ಲಿ ರಾಜರ ಒಡ್ಡೋಲಗ (ರಾಜ್ಯಸಭೆ) ನಡೆಯುತ್ತಿತ್ತೇ?! ಅಂದಿನ ದಸರಾ ನಡೆಯುತ್ತಿದ್ದ ಮಹಾನವಮಿ ದಿಬ್ಬ ಇಂದು ಬರೀ ಕಲ್ಲಿನ ದಿಬ್ಬವಾಗಿದೆ. ಅಂದು ರಾಜ-ರಾಣಿಯರ ವಿಲಾಸಿ ಸ್ನಾನದ ಕೊಳಗಳು ಇಂದಿಗೂ ವೈಭವಕ್ಕೆ ಸಾಕ್ಷಿಯಾಗಿವೆ.

ಶಿವರಂಜನಿ ಎಚ್ ಜಿ(ಸಹಾಯಕ ಪ್ರಾಧ್ಯಾಪಕಿ)

ಗಜ, ತುರಾಗ, ರಥದ ಸಾಲುಗಳು ಸದಾ ಯುದ್ಧಕ್ಕೆ ಸಿದ್ದರಾಗಿ ನಿಂತು ಶತ್ರುಗಳಿಗೆ ಶಕ್ತಿ ಪ್ರದರ್ಶನ ಮಾಡುತ್ತಿದ್ದರು. ಆದರೆ ಅವೆಲ್ಲವೂ ನಿಜವಾಗಿಯೂ ಇತ್ತೇ? ಎಂದು ಪ್ರಶ್ನೆಗಳೇಳುವಂತೆ ಸಾಮ್ರಾಜ್ಯ ಹಾಳಾಗಿದೆ. ಅಲ್ಲೆಲ್ಲಾ ಗಿಡ-ಬಳ್ಳಿಗಳು ಬೆಳೆದು ಅವಶೇಷವೂ ಕಾಣದಂತಾಗಿದೆ ಛತ್ರಿಯಂತೆ ಮರೆಮಾಚಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಹಾಳು ಹಂಪೆಯನ್ನು ವೀಕ್ಷಿಸುತ್ತ ಮುಂದುವರೆದು ಒಂದು ಕ್ಷಣ ನಿಂತು ಜಿಎಸ್ಎಸ್ ನಾಟ್ಯಮಂದಿರವನ್ನು ಕಂಡು ನಿಂತರು. ಅದ್ಭುತ ನಾಟ್ಯಮಂದಿರದಲ್ಲಿ ಅಂದು ಎಂತೆಂಥ ನರ್ತನ ಪ್ರದರ್ಶನಗಳು ನಡೆದಿತೋ ಎಂದು ಗತ ವೈಭವವನ್ನು ಕಣ್ಣೆದುರಿಗೆ ತಂದುಕೊಳ್ಳುವ ಮುನ್ನವೇ ಅಲ್ಲಿ ಬಾವುಲಿಗಳು ಸ್ವಚ್ಛಂದವಾಗಿ ಹಾರಾಡುತ್ತಿರುವುದನ್ನು ಕಂಡು ಕ್ಷಣ ಕಾಲ ಮಂಕಾದರು.

ಹಂಪೆಯಲ್ಲಿ ಹಜಾರ ರಾಮಸ್ವಾಮಿಯ ತಂಬೂರಿಯ ಧ್ವನಿ ತುಂಬಿ ತುಳುಕುತ್ತಿತ್ತು. ಆದರೀಗೆ ಗಂಭೀರ ಧ್ವನಿ ಹರಿಯುತ್ತಿದ್ದೆ. ಇದೇ ಜಾಗದಲ್ಲಿ ವಿವಿಧ ವಾದ್ಯದ ಹೊನಲು ಹೊಮ್ಮಿ ಬಹುಕಲಾ ಪರಿಣತಿ ಪಡೆದ ವಿವಿಧ ಲಲನಾ ಮಣಿಯರು ಗೆಜ್ಜೆ ಕಟ್ಟಿ ನರ್ತಿಸಿದ್ದರು. ಈ ಶೃತಿ, ಲಯ, ತಾಳಕ್ಕೆ ಮಂದಿರವೇ ರೋಮಾಂಚನಗೊಂಡಿತ್ತು. ಆದರೆ ಈಗ ಹಳೆಯ ನೆನಪುಗಳ ಸಂಪುಟಗಳಿವೆಯೇ ಹೊರತು ನಿಜ ವೈಭವವೆಲ್ಲ ಹೂತು ಹೋಗಿದೆ. ಈಗ ಈ ಹಾಳು ಹಂಪೆಯಲ್ಲಿ, ಹಳೆಯ ನೆನಪುಗಳ ಸಂಚರವಾಗುತ್ತಿವೆ. ದಿವ್ಯ ವೈಭವಕ್ಕೆ ಶತ್ರುಗಳು ಗೋರಿ ಕಟ್ಟಿದ್ದಾರೆ.

ವಿಜಯನಗರ ಶಿಲ್ಪ ಕಲೆಗೆ ಸುಪ್ರಸಿದ್ಧವಾದ ನಾಡು. ಇಲ್ಲಿ ಅನೇಕ ಅಪೂರ್ವ ಶಿಲ್ಪ ಕಲೆಗಳು ಅರಳಿವೆ. ಉಗ್ರನರಸಿಂಹ ಮೂರ್ತಿಯನ್ನು ಕಂಡ ಕವಿ ಪುರಾಣಗಳಲ್ಲಿ ಉಗ್ರನರಸಿಂಹನ ಭಕ್ತರನ್ನು ಉದ್ದರಿಸಲು ಕಂಬವನ್ನು ಒದೆದು ಮೂಡಿ ಬಂದನು. ಆದರೆ ಈ ಹಾಳು ಹಂಪೆಯಲ್ಲಿ ಅವನೇ ಬಗ್ನನಾಗಿದ್ದಾನೆ. ಅದರ ಪಕ್ಕದಲ್ಲಿಯೇ ಎತ್ತರದಲ್ಲಿ ಶಿವಲಿಂಗ ಕುಳಿತಿದ್ದಾನೆ. ಅಲ್ಲೇ ಸಾಸಿವೆ ಕಾಳು ಗಣಪ. ಗಾತ್ರದಲ್ಲಿ ಮಾತ್ರ ಗಜಭೀವನ ಆಕಾರ. ಅಲ್ಲಿಯೇ ಜೈನರ ಬಸದಿಯೂ ತಪಸ್ವರ್ಯವಾಗುವಂತೆ ತೋರುತ್ತದೆ. ವಿಜಯ ವಿಠಲ ದೇವಾಲಯವು ಕಲೆಗಳ ಬೀಡೆಂದು ಖ್ಯಾತಿಯಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಅಲ್ಲಿಯೇ ರಥವಿದೆ. ಹಜಾರರಾಮನ ಗಡಿ ಮೌನವಾಗಿ ಎಲ್ಲೆಲ್ಲೂ ನಿಶಬ್ದವಾಗಿದೆ ಉದ್ದಂಡ ವೀರಭದ್ರನೂ ತನ್ನ ಕಲೆಯನ್ನು, ಶಕ್ತಿಯನ್ನು ಕಳೆದುಕೊಂಡು ಮಂಕಾಗಿದ್ದಾನೆ. ಎಂತೆಂಥಾ ಅದ್ಭುತ ಚೆಲುವಿನ ಕಲೆಯು ಅರಳಿದ್ದವು. ಈ ಕಲೆಯ ಕೊರಳನ್ನು ಶತ್ರುಗಳು ಸಮರದಲ್ಲಿ ಮುರಿದಿದ್ದಾರೆ. ಈ ಬಗ್ನವಶೇಷಗಳನ್ನು ಕಂಡಾಗ ಎಂಥವರಿಗೂ ಕಣ್ಣೀರು ಬಾರದೆ ಇರದು. ಇಂತಹ ಕಲೆಯನ್ನು ಬಳಸದಿದ್ದರೆ ನಮ್ಮದು ಒಂದು ಬಾಳು ಎನಿಸುತ್ತದೆಯೆ ? ಮನುಷ್ಯ ಮನುಷ್ಯತ್ವವನ್ನು ಮರೆತು ಕ್ರೂರ ಮೃಗವಾದಾಗ ಆ ಕ್ರೂರ ಮೃಗಗಳಿಗಿಂತಲೂ ಕಡೆಯಾಗುತ್ತಾನೆ.

ಒಂದು ಕಾಲದಲ್ಲಿ ಸಂಸ್ಕೃತಿಕವಾಗಿ, ರಾಜಕೀಯವಾಗಿ, ಕಾಲಾತ್ಮಕವಾಗಿ ವೈಭವದ ಪರಾಕಾಷ್ಟೆಯಲ್ಲಿದ್ದ ಹಂಪಿ ಬಹುಮನಿ ಸುಲ್ತಾನರ ವಿಧ್ವಂಸಕ ದಾಳಿಯಿಂದಾಗಿ ಶಿವನ ಮನೆಯಂತೆ ಆದುದರ ಕುರಿತು ವಿಷಾದಿಸುತ್ತಾರೆ. ಕವಿತೆಯು ಹಂಪೆಯ ಹಿಂದಿನ ವೈಭವವನ್ನು ಹೇಳುತ್ತಲೇ ಪ್ರಸ್ತುತತೆಯನ್ನು ಕಟ್ಟಿ ಕೊಟ್ಟಿರುವುದು ಕವಿಯ ಜಾರ್ಣೆಗೆ ಹಿಡಿದ ಕನ್ನಡಿ ಎಂದರೆ ತಪ್ಪಿಲ್ಲ.



ಅಮ್ಮ, ಆಚಾರ, ನಾನು

03- ಅಮ್ಮ, ಆಚಾರ, ನಾನು 

-ಕೆ ಎಸ್ ನಿಸಾರ್ ಅಹಮದ್ 


ಸಂಪ್ರದಾಯಸ್ಥ ಅಮ್ಮನ ನಂಬಿಕೆಯ ವಿರುದ್ಧ ಹೋರಾಡಿರುವ ಮಗನಿಗೆ ಜಯ ಸಿಗುತ್ತೋ ಇಲ್ಲವೋ ಎನ್ನುವ ನೆಲೆಯಲ್ಲಿ ಈ ಕವಿತೆ ಚರ್ಚಿತ್ತವಾಗಿದೆ. ನನ್ನ ತಾಯಿ ನನಗೆ ಮದುವೆ ಮಾಡಬೇಕೆಂಬ ನಿಶ್ಚಯ ಮಾಡಿ ಮದುವೆಗೆ ಮುಂಚೆ ಅನೇಕ ಹೆಣ್ಣುಗಳನ್ನು ನೋಡಿಕೊಂಡು ಬಂದಳು. ಅದರಲ್ಲಿ ಪ್ರತಿಯೊಬ್ಬ ಹೆಣ್ಣು ಮಗಳನ್ನು ಕೂಡ ಅವಳು ಹಾಗೆ, ಹೀಗೆ ಅಂತ ಹೇಳಿ ನಿರಾಕರಿಸುತ್ತಾ ಬಂದಳು. ಪ್ರತಿಯೊಬ್ಬ ಹೆಣ್ಣು ಮಗಳನ್ನು ಅವಳ ಕಣ್ಣ ನೋಟದಲ್ಲಿ ನೋಡಿ ಅಳೆದು ತೂಗಿ, ಯಾವ ರೀತಿ ನಿರಾಕರಿಸುವಳೆಂದರೆ ಒಬ್ಬಳು ತುಂಬಾ ಕಪ್ಪು, ಉದ್ದ ನಾಲಿಗೆ, ತುಂಬಾ ಮಾತಾಡ್ತಾಳೆ, ಇನ್ನೊಬ್ಬಳು ಲಂಕೆಣಿ, ಜಿರಾಫೆಣಿ, ಬೆದರು ಗೊಂಬೆಯಂಗೆ, ಇನ್ನೊಬ್ಬಳ ಹಲ್ಲುಗಳು ಚಿಕ್ಕ ಮಕ್ಕಳ ಅಕ್ಷರಗಳ ಹಾಗೆ ತನ್ನ ಮಗನಿಗೆ ಸರಿ ಹೊಂದುವುದಿಲ್ಲ ಎಂದು ಪ್ರತಿಯೊಬ್ಬ ಹೆಣ್ಣು ಮಗಳಿಗೆ ಬಿರುದುಗಳನ್ನು ಹಂಚಿ ತಿರಸ್ಕರಿಸುತ್ತಾಳೆ. ನನ್ನ ತಾಯಿಯ ಈ ಮನೋಭಾವದಿಂದ ನಾನು ಮದುವೆ ಮದುವೆಯಾಗದೆ ಹಾಗೆ ಉಳಿದೆ. ಹಾಗಾಗಿ ನನ್ನ ತಾಯಿಯ ಬಗ್ಗೆ ಮನಸಲ್ಲೇ ಬೇಸರ ಪಟ್ಟುಕೊಂಡೆ ಎಂಬುದಾಗಿ ಪ್ರತಿ ಹೆಣ್ಣನ್ನು ನಿರಾಕರಿಸಿದ ಬಗೆಯನ್ನು ಕವಿ ನಿರೂಪಣಾತ್ಮಕವಾಗಿ ಕವಿಯಲ್ಲಿ ವಿವರಿಸಿದ್ದಾರೆ.

ಶಿವರಂಜನಿ ಎಚ್ ಜಿ(ಸಹಾಯಕ ಪ್ರಾಧ್ಯಾಪಕಿ)

ತಾಯಿ ಕುರಿತು ಕವಿ ಹೇಳುವಂತೆ ಅಮ್ಮ ಕಟ್ಟಾ ಸಂಪ್ರದಾಯಸ್ಥ. ಕುರಾನ್ ಓದುವುದು, ನಮಾಜ್ ಮಾಡುವುದು, ರಂಜಾನ್ ದಿನಗಳಲ್ಲಿ 








ಕನ್ನಡ ರಾಜ್ಯೋತ್ಸವ

 02. ಕನ್ನಡ ರಾಜ್ಯೋತ್ಸವ

ಕೆ. ಎಸ್ .ನರಸಿಂಹ ಸ್ವಾಮಿ

ಕನ್ನಡ ಎಂದರೆ ಅದು ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ ,ಮನೋಧರ್ಮ. ಬ್ರಿಟಿಷ ಕಾಲದಲ್ಲಿ ಅತಾರ್ಕಿಕವಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಮತ್ತೆ ಏಕೀ ಕೃತಗೊಂಡಿದ್ದು ಸ್ವಾತಂತ್ರ್ಯೋತರ ಕಾಲದಲ್ಲೇ. 1956 ನವಂಬರ್ 01 ರಂದು ಒಗ್ಗೂಡಿದ ಕರ್ನಾಟಕದ ಬಗ್ಗೆ ಕವಿ ಮೈದುಂಬಿ ವರ್ಣಿಸುತ್ತಾರೆ.

ಕನ್ನಡಿಗರಿಗೆ ಕರ್ನಾಟಕದ ಏಕೀಕರಣವು ಗಗನ ಕುಸುಮವೆಂದು ಭಾಸವಾಗಿತು. ಏಕೀಕರಣದ ನಿಗೂಢ ನಿರೀಕ್ಷೆಯಲ್ಲಿ ಕನ್ನಡಿಗರ ಆಸೆ ಫಲಿಸಿತು. ಕನ್ನಡ ನಾಡಿಗೆ ಕೊರಳಹಾರವಾಗಿ 'ಕರ್ನಾಟಕ' ಎಂಬ ಅಭಿದಾನ ಲಭಿಸಿತು ಮನೆಮನೆಯ ಮುಂದೆ ಸಂಭ್ರಮದ ರಂಗವಲ್ಲಿಯನ್ನು ಚೆಲ್ಲಿತ್ತು. ಕನ್ನಡ ನಾಡಿನ ಮಣ್ಣು ಕಪ್ಪಾದರೂ ಶ್ರೀಗಂಧದಂತ ಕಂಪನ್ನು ಸೂಸುವಂತದ್ದು. ತಂಪಾದ ನಾಡು. ಈ ಮಣ್ಣಿನಲ್ಲಿ ಬೆಳೆದ ಹಣ್ಣು ಜೇನಿನ ಹನಿ ಎಷ್ಟು ರುಚಿಯಾದದ್ದು ಮಲ್ಲಿಗೆಯನ್ನು ಮುಡಿದ ಸುಂದರಿಯರ ಮಾತು ಇಂಪಾಗಿದೆ ಸುಸಂಸ್ಕೃತವಾಗಿದೆ.

ಕರ್ನಾಟಕವು ಅರಣ್ಯ ಸಂಪತ್ತನ್ನು ಹೊಂದಿರುವ ನಾಡಾಗಿದೆ. ಎತ್ತರವಾದ ಪರ್ವತಗಳಲ್ಲಿ ಅನೇಕ ವನ್ಯ ನುಗಗಳು ಒಗ್ಗಟ್ಟಿನಿಂದ ಬಾಳುತ್ತಿವೆ. ಇಲ್ಲಿರುವ ಅನೇಕ ಜಲಪಾತಗಳಿಂದ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರಿಂದ ನಮ್ಮ ನಾಡು ಕತ್ತಲಲ್ಲೂ ಬೆಳಕನ್ನು ಕಾಣುತ್ತಿದೆ.

ಶಿವರಂಜನಿ ಎಚ್ ಜಿ(ಸಹಾಯಕ ಪ್ರಾಧ್ಯಾಪಕಿ)

ಕನ್ನಡ ನಾಡಿನ ಗಡಿ ಭಾಗಗಳಲ್ಲಿ ಇರುವ ಸಮುದ್ರ ತೀರಗಳಲ್ಲಿ ತೆರೆಯನ್ನು ಧರಿಸಿ ಸೀರೆಯನ್ನುಟ್ಟಿ, ಪಶ್ಚಿಮ ಘಟ್ಟಗಳಲ್ಲಿ ಕಾಮನಬಿಲ್ಲಿನಂಥ ಕಿರೀಟವನ್ನು ಧರಿಸಿ ಭೂಮಿ ಅಲಂಕೃತಳಾಗಿ ಚೆಲುವೆಯಂತೆ ಕಂಗೊಳಿಸುತ್ತಾ ಇದ್ದಾಳೆ. ಈ ಸಂಪತ್ತು ಗಳೆಲ್ಲವೂ ತಾಯಿ ಭುವನೇಶ್ವರಿಗೆ ಕಿರೀಟ ಪ್ರಯಾಣವಾಗಿವೆ.

ಸಂಪತ್ ಭರಿತಳಾಗಿ ತಾಯಿ ಬಾನತೆಗೆ ಮುತ್ತು ಕೊಟ್ಟು ಶ್ರಮಿಕರ ರಟ್ಟೆಗೆ ಉದ್ಯೋಗ ಒದಗಿಸಿ, ಜೀವನ ನೀಡಿ ಕನ್ನಡಿಗರ ಕಣ್ಗಳಲ್ಲಿ ಪ್ರಕಾಶಮಾನವಾದ ಭರವಸೆಯ ಬೆಳಕನ್ನು ತುಂಬಿದ್ದಾಳೆ.

ಭವ್ಯ ಭವಿಷ್ಯದ ನಾಡೊಂದನ್ನು ಕಟ್ಟುವ ಹುಮ್ಮಸ್ಸಿನಲ್ಲಿರುವ ಕ್ಷಮಿಕರ ಬೆನ್ನು ತಟ್ಟುವ ಮೂಲಕ ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯದಂತೆ ನಮಗೆ ಪ್ರೋತ್ಸಾಹಿಸುತ್ತಾ ಧೈರ್ಯವಾಗಿ ನಡೆಯುವ ಶಕ್ತಿ ಕೊಡು ಎಂದು ತಾಯಿ ಭುವನೇಶ್ವರಿಯಲಿ ಪ್ರಾರ್ಥಿಸುತ್ತಾರೆ.

ನಾವೆಲ್ಲರೂ ಒಗ್ಗಟ್ಟಿನಿಂದ ಮೈ ಬೆವರು ಸುರಿಸಿ ದುಡಿದು, ಬಡತನವನ್ನು ತೊಡೆದು ಹಾಕಲು ಶಕ್ತಿಯನ್ನು ಕೊಡು. ನಮ್ಮಲ್ಲಿ ಬೇದ- ಭಾವವನ್ನು ತೊಲಗಿಸು, ಶುಭವನ್ನು ನಮಗೆ ಅರಸು ಎಂದು ಪ್ರಾರ್ಥಿಸುತ್ತಿದ್ದಾರೆ.

ಕರ್ನಾಟಕ ಏಕೀಕರಣವಾದ ಈ ಸಂದರ್ಭದಲ್ಲಿ ಆನಂದ ಸಡಗರ ಪಡುತ್ತಾ, ಉತ್ತಮ ಭವಿಷ್ಯಕ್ಕೆ ದೇವಿಯಲ್ಲಿ ಮೊರೆ ಇಟ್ಟಿದ್ದಾರೆ ಇನ್ನು ಮುಂದೆ ನಾಡು ಛಿದ್ರವಾಗದಾಹಾಗೆ ನಮಗೆಲ್ಲರಿಗೂ ಅನುಗ್ರಹಿಸು ತಾಯಿ ಎಂಬ ಆಶಯ ಈ ಕವಿತೆಯಲ್ಲಿ ಒಡ ಮೂಡಿದೆ/ ಮೂಡಿಬಂದಿದೆ.


 

ಕನ್ನಡಾಂಬೆಯ ಹಿರಿಮೆ

01-ಕನ್ನಡಾಂಬೆಯ ಹಿರಿಮೆ ಸಾರಾಂಶ 
-ಬೆನಗಲ್ ರಾಮರಾವ್

 ಕರ್ನಾಟಕ ವಿಶಾಲವಾದ ನಾಡು ಈ ವ್ಯಾಪ್ತಿಯನ್ನು ಮೀರಿ ಹರಡಿದ್ದ ನಾಡಾಗಿತ್ತು ನಮ್ಮ ಜನ ಕನ್ನಡ ಹೆಮ್ಮೆಯಿಂದ ಬಳಸುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಪತನ ದ ವರೆಗೆ ಈ ಭಾಗದ ನೆಲವನ್ನಾಳಿದ ರಾಜರು ಕನ್ನಡದಲ್ಲೇ ತಮ್ಮೆಲ್ಲ ವ್ಯವಹಾರಗಳನ್ನು ಮಾಡುತ್ತಿದ್ದರಿಂದ ಕನ್ನಡ ನುಡಿಯ ಸಾಮರ್ಥ್ಯದ ಬಗ್ಗೆ ಸಂಪೂರ್ಣ ವಿಶ್ವಾಸವಿತ್ತು ನನ್ನ ಕಾರಣಗಳಿಂದ ಕನ್ನಡಿಗರು ಬೇರೆ ಬೇರೆ ಭಾಗಗಳಲ್ಲಿ ಚದುರಿದ್ದರಿಂದ ಕನ್ನಡ ಭಾಷೆಯ ಮೇಲೆ ಅಭಿಮಾನ ಕುಗ್ಗಿತ್ತು.

ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ದೇಶದ ಸ್ವಾತಂತ್ರ್ಯಕ್ಕೆ ಚಳುವಳಿ ನಡೆಸಿದ ಕರ್ನಾಟಕದ ಧೀಮಂತ ಚೇತನಗಳು ಕರ್ನಾಟಕದ ಏಕೀಕರಣಕ್ಕೆ ಪಣ ತೊಟ್ಟರು. ಬೆನಗನ್ ರಾಮರಾವ್ ಅವರು 'ಕನ್ನಡಾಂಬೆಯ ಹಿರಿಮೆ' ಕವಿತೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಾಡು-ನುಡಿ, ನೆಲ-ಜಲದ ಬಗೆಗೆ ಅಭಿಮಾನ ಹೊಂದಿದ್ದ ಕನ್ನಡಿಗರ ಬಗ್ಗೆ ಈ ಕವಿತೆಯಲ್ಲಿ ಹೇಳಲಾಗಿದೆ.

ಪ್ರಸ್ತುತ ಕವನವನ್ನು ಎಸ್. ಚೆನ್ನಪ್ಪ ರವರು ಸಂಪಾದಿಸಿರುವ 'ಕವಿಗಳ ಕಂಡ ಕರ್ನಾಟಕ' ಕೃತಿಯಿಂದ ಆರಿಸಿಕೊಳ್ಳಲಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡ ನಾಡಿನ ಸಂಸ್ಕೃತಿ, ಸಮಗ್ರ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿತ್ತು. ಕನ್ನಡಿಗರಿಗೆ ಕನ್ನಡ ಕೇವಲ ಭಾಷೆ ಮಾತ್ರವಲ್ಲ ಸರ್ವಸ್ವವು ಆಗಿತ್ತು. ಒಂದು ಜೀವಿ ಬದುಕಲು ಗಾಳಿ, ಬೆಳಕು, ನೀರು, ಭೂಮಿ, ಅಗ್ನಿ ಹೇಗೆ ಮುಖ್ಯವೋ ಹಾಗೆ ಕನ್ನಡವೂ ನನಗೆ ಮುಖ್ಯವೆಂದು ಕವಿತೆ ಪ್ರಾರಂಭಿಸಿರುವ ಕವಿ ಎನ್ನ ಕಣ್ಣು ,ಕಿವಿ,ಮೂಗು ಬಾಯಿಯೂ ಕನ್ನಡವೇ ಎಂದಿದ್ದಾರೆ.

ಕನ್ನಡ ಸರಸ್ವತಿ (ಭುವನೇಶ್ವರಿ ದೇವಿ) ವಿಶ್ವ ಮಾನ್ಯತೆ ಪಡೆದಿದ್ದಾಳೆ. ಬಯಸಿದ್ದನ್ನು ಕೊಡುವ ಕಲ್ಪವೃಕ್ಷವಾಗಿದ್ದಾಳೆ. 'ದಕ್ಷಿಣ ಗಂಗೆ ಕಾವೇರಿ' ಗಂಗಾ ನದಿಗೆ ಸರಿಸಮಾನವಾದವಳು. ಕನ್ನಡದ ಸಿರಿ ಸಂಪತ್ತು (ಅರಣ್ಯ ಸಂಪತ್ತು, ದೇವಾಲಯಗಳು, ಸಾಹಿತ್ಯ ಕೃತಿಗಳು, ಅರಮನೆಗಳು, ಕೋಟೆಗಳು, ನದಿ-ಜಲಗಳು) ನನಗೆ ಆಪ್ಯಾಯಮಾನವಾದವುಗಳು ಎಂದಿದ್ದಾರೆ.

ಶಿವರಂಜನಿ ಎಚ್ ಜಿ(ಸಹಾಯಕ ಪ್ರಾಧ್ಯಾಪಕಿ)

ಕನ್ನಡಕ್ಕೆ ಸಮಾನವಾದರೆ, ಪ್ರತಿಷ್ಠೆ ದೊರೆತಿದೆ, ತನಗೆ ದೊರೆತಂತೆ ಹೆಮ್ಮೆಪಡುವ ರಾಮರಾಯರು ತಮಗೆ ವರಮಾನ ಒಂದಷ್ಟು ಸಂತಸ ಪಡುತ್ತಾರೆ. ಕನ್ನಡಿಗರು ಹೇಡಿಗಳಲ್ಲ ಈ ಪುಣ್ಯ ಭೂಮಿಗಳಲ್ಲಿ ಸ್ವಾತಂತ್ರ್ಯವಾಗಿ ಬದುಕಲು ತಾಯಿ ಭುವನೇಶ್ವರಿಯ ಶ್ರೀ ರಕ್ಷೆ ಇದೆ. ಕನ್ನಡ ವಿಶ್ವ ಮನ್ನಣೆ ಪಡೆದು ಅದರ ಕೀರ್ತಿ ಪತಾಕೆ ಅಷ್ಟ ದಿಕ್ಕುಗಳಲ್ಲೂ ಹರಡಿದೆ. ಇದೇ ತನ್ನ ಮನಸ್ಸಿಗೆ ಸ್ಪೂರ್ತಿ ಎಂದು ನವಚೈತನ್ಯಭರಿತವಾಗಿದ್ದಾರೆ. ಚದುರಿರುವ ಕನ್ನಡ ಒಗ್ಗೂಡಿದರೆ ಇದೇ ನನಗೆ ಕಿರೀಟ ಎಂದು ಹೆಮ್ಮೆ ಪಡುತ್ತಾರೆ.

ಕಪ್ಪು ಮಣ್ಣಿನ ನಾಡಿನ ಕರ್ನಾಟಕದ ಮಣ್ಣು ಬರಿಯ ಮಣ್ಣಲ್ಲ ಅದು ಕವಿಗಳ ಪ್ರಕಾರ ನವ-ನಿಧಿ, ಸಿರಿ- ಸಂಪತ್ತು,( ಭೂಮಿಯಿಂದ ಬಂದ ಬೆಳೆ, ಜಲ, ಖನಿಜಗಳು) ಕರ್ನಾಟಕದ ನೀರು ಪರಿಶುದ್ಧವಾದದ್ದು. ಅಮೃತ ಸಮಾನವಾಗಿದ್ದ ಈ ಭೂಮಿಯಲ್ಲಿ ಬೆಳೆಯುವ ಹೂ ಗಿಡಗಳು ಎನಗೆ ಆಭರಣ ಇದ್ಧ ಹಾಗೆ ಕನ್ನಡ ನಾಡು ಸಂಪತ್ಭರಿತವಾಗಿದ್ದು ಬೇಕಾದಷ್ಟು ಪಶು ಪಕ್ಷಿಗಳಿಗೆ ಆಸರೆಯಾಗಿ ಈ ನೆಲದ ಸೊಬಗನ್ನು, ಸಂಪತ್ತನ್ನು ಹೆಚ್ಚಿಸಿದೆ.

ಭುವನೇಶ್ವರಿಯ ದಯೆಯೇ ಕನ್ನಡಿಗರಿಗೆ ಅತಿಶಯ. ಶ್ರೀ ಕೃಷ್ಣ ಪರಮಾತ್ಮನು ಈ ನೆಲದಲ್ಲಿ ನೆಲೆಸಿರುವುದರಿಂದ ಕನ್ನಡಿಗರಿಗೆ ಒಗ್ಗಟ್ಟು. ಕರ್ನಾಟಕದ ಬಲ ಸದೃಢವಾದಂತೆ ; ತಾನೇ ಬಲಶಾಲಿಯಾದಂತೆ ಕನ್ನಡ ಜನರ ಒಗ್ಗಟ್ಟಿನ ಬಗ್ಗೆ ಕರ್ನಾಟಕವನ್ನು ಕಾಪಾಡುವ ಕೈಗಳ ಬಗ್ಗೆ ಹೆಮ್ಮೆಪಟ್ಟಿದ್ದಾರೆ.

ಶಬರಿ ರಾಮನ ದರ್ಶನದ ನಂತರ ಮುಕ್ತಿ ಪಡೆದಂತೆ ಇನ್ನೊಬ್ಬರ ಹಂಗಿನಲ್ಲಿ ಇರುವ ನಮಗೆ ವಿದೇಶಿಯರಿಂದ ಒಂದಲ್ಲ ಒಂದು ದಿನ ಮುಕ್ತಿ ಸಿಕ್ಕೇ ಸಿಗುತ್ತದೆ ಎಂಬ ಆಶಾಭಾವನೆಯನ್ನು ಕವಿ ಈ ಪದ್ಯದಲ್ಲಿ ವ್ಯಕ್ತಪಡಿಸಿದ್ದಾರೆ.

ನನ್ನ ಶಾಲೆ

06- ನನ್ನ ಶಾಲೆ  -ಜ.ನಾ. ತೇಜಶ್ರೀ   'ನನ್ನ ಶಾಲೆ' ಪದ್ಯವೂ ನಾವು ಓದಿದ ಶಾಲೆಯ ಚಿತ್ರಣ   ನೀಡುವುದರ ಜೊತೆಗೆ ಆಧುನಿಕರಣಕ್ಕೆ ಒಳಗಾದಾಗ ಅದರಲ್ಲಿ ಆಗುವ ಮಾರ್ಪಾ...